Monday, November 24, 2008
ಸುಲಭಕನ್ನಡಕೈಗನ್ನಡಿ- (ಆವೃತ್ತಿ ೨.೦)
ನೀವು ಏನಾದರೂ ಬರೆಯುತ್ತಾ ಇದ್ದರೆ ಈ ಕೆಳಗಿನ ಪಟ್ಟಿ ನೋಡಿ. ಇಲ್ಲಿನ ಶಬ್ದವನ್ನ ನೀವು ಬಳಸಿದ್ದರೆ ಅದರ ಬದಲಾಗಿ ಅದರ ಮುಂದೆ ಕೊಟ್ಟಿರುವ ಸುಲಭಕನ್ನಡ ಶಬ್ದ ಬಳಸಬಹುದೋ ನೋಡಿ .. ಇಲ್ಲಿ ಸುಮಾರು ೨೫೦ ಶಬ್ದಗಳಿವೆ.(ಸು)ದೀರ್ಘ -ಉದ್ದ
ಅಂತರಂಗ-ಒಳಗು
ಅಂತ್ಯ - ಕೊನೆ , ಕಡೆ
ಅಂಧಕಾರ - ಕತ್ತಲು, ಕತ್ತಲೆ
ಅಕಸ್ಮಾತ್ತಾಗಿ-ಪಳಚ್ಚನೆ
ಅಗೋಚರ - ಕಾಣದ
ಅಗ್ನಿ -ಬೆಂಕಿ , ಕಿಚ್ಚು
ಅಗ್ನಿಜ್ವಾಲೆ - ಬೆಂಕಿಯ (ಕೆನ್)ನಾಲಿಗೆ
ಅಜ್ಞಾತ - ತಿಳಿಯದ
ಅಧಿಕ - ಹೆಚ್ಚು
ಅನೇಕ - ಬಹಳ
ಅಪಕ್ವ - ಎಳಸು , ಹಣ್ಣಾಗದ
ಅಪೇಕ್ಷಿತ - ಬಯಸಿದ
ಅಪೇಕ್ಷೆ - ಬಯಕೆ
ಅಭಿಮತ , ಅಭಿಪ್ರಾಯ - ಅನಿಸಿಕೆ
ಅಭಿವೃದ್ಧಿ-ಏಳಿಗೆ
ಅಲರ್ಟ್- ಎಚ್ಚರ , ಕಟ್ಟೆಚ್ಚರ
ಅವನತಿ = ಕೀಳ್ಮೆ , ಇಳಿಥರ
ಅವಿಭಕ್ತ ಕುಟುಂಬ - ಕೂಡುಕುಟುಂಬ
ಅಶುದ್ಧ - ಬೆರಕೆ
ಅಸತ್ಯ -ಸುಳ್ಳು , ಸಟೆ , ಹುಸಿ
ಅಸ್ತಿತ್ವ- ಉಳಿವು , ಇರವು , ಇರುವಿಕೆ
ಆಕರ್ಷಣೆ - ಸೆಳೆತ
ಆಕರ್ಷಿಸು - ಸೆಳೆ
ಆಗಮನ- ಬರವು
ಆಗಮಿಸು - ಬರು
ಆಜ್ಞೆ- ಅಪ್ಪಣೆ
ಆದಿ - ಮೊದಲು
ಆಧಿಕ್ಯ - ಹೆಚ್ಚಳ
ಆರ್ದ್ರ - ಹಸಿ , ತೇವ
ಆಲಂಗಿಸು -ಅಪ್ಪು , ಅಪ್ಪಿಕೋ
ಆಲಿಂಗನ - ಅಪ್ಪುಗೆ
ಆಶ್ಚರ್ಯ - ಅಚ್ಚರಿ
ಆಶ್ರಯ - ಅಸರೆ , ನೆರಳು
ಆಸ್ಥಾನ - ಓಲಗ , ಓಡ್ಡೋಲಗ
ಆಹ್ವಾನ, ಆಮಂತ್ರಣ - ಕರೆ ( ಬರಹೇಳು)
ಇದಮಿತ್ಥಂ - ಇದು ಹೀಗೇ
ಉಗಮವಾಗು - ಹುಟ್ಟು
ಉಚ್ಚ - ಮೇಲ್ಮಟ್ಟದ , ಹಿರಿಯ
ಉತ್ತರ - ಬದಲು , ಜವಾಬು
ಉದ್ದೇಶಿಸಿ - ಕುರಿತು
ಉದ್ಧರಿಸು - ಮೇಲಕ್ಕೆತ್ತು
ಉದ್ಧರಿಸು - ಎತ್ತಿ ಹೇಳು
ಉದ್ಧಾರ - ಮೇಲೆತ್ತುವಿಕೆ
ಉದ್ಭವವಾಗು - ಕಾಣಿಸಿಕೊಳ್ಳು
ಉಪಲಬ್ಧ ಇರು - ಸಿಗುತ್ತ ಇರು
ಉಪಸ್ಥಿತರಿರು - ಹಾಜರಿರು
ಉಪಸ್ಥಿತಿ - ಹಾಜರಿ
ಉಪೇಕ್ಷಿಸು- ಕಡೆಗಾಣು
ಉಭಯ - ಎರಡೂ / ಇಬ್ಬರೂ
ಏಕ - ಒಂದು
ಐಕ್ಯತೆ- ಒಗ್ಗಟ್ಟು
ಐಕ್ಯಮತ- ಒಗ್ಗಟ್ಟು
ಕರ್ತವ್ಯ - ಮಾಡಬೇಕಾದ್ದು , ಮಾಡತಕ್ಕುದು
ಕಾಮ - ಮೈಯಾಸೆ
ಕಾರಾಗೃಹ-ಸೆರೆಮನೆ
ಕಾರ್ಪೆಂಟರ್ - ಬಡಗಿ , ಮರಗೆಲಸಗಾರ
ಕಾಲ-ಹೊತ್ತು
ಕಾಷ್ಠ - ಕಟ್ಟಿಗೆ
ಕುಬ್ಜ -ಕುಳ್ಳ
ಕೃತಜ್ಞ- ಹಂಗಿಗ
ಕ್ಲಿಷ್ಟ - ಕಠಿಣ
ಕ್ಷೀರ ಸಮುದ್ರ - ಹಾಲ್ಗಡಲು
ಖಾಲಿ - ಬರಿದು , ತೆರವು
ಖಾಲಿ ಮಾಡು - ಬರಿದು , ತೆರವುಗೊಳಿಸು
ಗಂಡಾಂತರ - ಕುತ್ತು, ಆಪತ್ತು
ಗರ್ವ - ಸೊಕ್ಕು
ಗಾಢಾಂಧಕಾರ - ಕಗ್ಗತ್ತಲು
ಗರ್ಭ - ಬಸಿರು
ಘಟಿಸು- ಜರುಗು
ಘೋಷಿಸು - ಸಾರು
ಚಿಂತೆ - ಕೊರಗು
ಚೋರ- ಕಳ್ಳ
ಛಿದ್ರವಾಗು - ಒಡೆ, ಒಡೆದುಹೋಗು
ಜಯಾಪಜಯ - ಸೋಲೂಗೆಲವು
ಜಲ - ನೀರು
ಜೀರ್ಣವಾಗು - ಅರಗು
ಜೀರ್ಣಿಸು - ಅರಗಿಸು
ಜೀವನ - ಬದುಕು, ಬಾಳು
ಜೀವಿಸು - ಬದುಕು,ಬಾಳು
ಜ್ಞಾಪಕ - ನೆನಪು
ಜ್ಞಾಪಕಾರ್ಥ - ನೆನಪಿನಲ್ಲಿ, ನೆನಪಿಗಾಗಿ
ಜ್ಞಾಪಿಸು - ನೆನಪಿಸು
ತಕ್ಷಣ - ಕೂಡಲೆ
ತಥಾಸ್ತು- ಹಾಗೇ ಆಗಲಿ , ಹಾಗೇ ಆದೀತು , ಒಪ್ಪಿಗೆ
ತನು - ಮೈ
ತಿರಸ್ಕರಿಸು - ಕಡೆಗಾಣು
ತಿರಸ್ಕಾರ - ಕಡೆಗಾಣುವಿಕೆ
ತುಲನೆ - ಹೋಲಿಕೆ
ತೃಷೆ- ನೀರಡಿಕೆ , ಬಾಯಾರಿಕೆ
ತೈಲ - ಎಣ್ಣೆ
ತ್ಯಜಿಸು - ಬಿಡು
ದಾಹ- ನೀರಡಿಕೆ , ಬಾಯಾರಿಕೆ
ದುಷ್ಕರ್ಮಿ- ಕೇಡಿ
ದೇಹ - ಮೈ
ದೇಹ, ಶರೀರ - ಮೈ
ದ್ವಾರ - ಬಾಗಿಲು -
ಧ್ವಜ- ಬಾವುಟ
ನಗ್ನ - ಬೆತ್ತಲೆ
ನಯನ - ಕಣ್ಣು
ನವ - ಹೊಸ/ ಒಂಬತ್ತು
ನವರಂಧ್ರ- ಒಂಬತ್ತು ತೂತು !
ನವೀನ - ಹೊಸ
ನವೀನತೆ, ನಾವೀನ್ಯ -ಹೊಸತನ
ನಾಮಕರಣ ಮಾಡು - ಹೆಸರಿಡು
ನಿಂದೆ - ತೆಗಳಿಕೆ
ನಿಯಂತ್ರಣ - ಹಿಡಿತ , ಅಂಕೆ
ನಿಯಂತ್ರಣ-ಕಡಿವಾಣ
ನಿರಾಕರಿಸು - ಅಲ್ಲಗಳೆ
ನಿರೀಕ್ಷಿಸು - ಎದುರುನೋಡು , ಇದಿರುನೋಡು
ನಿರ್ಗಮಿಸು - ತೆರಳು , ತೊಲಗು , ಹೊರಡು , ಹೊರಹೋಗು
ನಿಶ್ಚಯಿಸು- ಗೊತ್ತುಪಡಿಸು
ನೀಚ - ಕೀಳು , ಕೆಳಮಟ್ಟದ , ಕೆಳ
ನೇತಾರ - ಮುಂದಾಳು
ನೇತೃತ್ವ - ಮುಂದಾಳ್ತನ
ನೇತ್ರ - ಕಣ್ಣು
ಪಕ್ಷಿ- ಹಕ್ಕಿ
ಪತನ -ಬೀಳು
ಪಥ - ಹಾದಿ ,
ಪರಕೀಯರು -ಹೆರವರು
ಪರಸ್ಪರ - ಒಬ್ಬರನ್ನೊಬ್ಬರು , ತಮ್ಮತಮ್ಮಲ್ಲಿ
ಪರಾಜಿತ - ಸೋತವ
ಪರಿಗಣಿಸು - ಎಣಿಸು
ಪರಿಗಣನೆ - ಎಣಿಕೆ
ಪರೋಕ್ಷ - ಬಲಸು , ಬಳಸಿ
ಪರ್ಯಾಯ - ಬದಲಿ
ಪಶ್ಚಾತ್ತಾಪ -ಹಿನ್ನೋವು
ಪಾಣಿಗ್ರಹಣ ಮಾಡು - ಕೈ ಹಿಡಿ
ಪಾರಂಗತ - ನಿಪುಣ , ಕೋವಿದ , ಬಲ್ಲಿದ
ಪಾರ್ಶ್ವ - ಮಗ್ಗಲು , ಬದಿ , ಪಕ್ಕ
ಪುನಃ /ಪುನರ್ - ಮರು , ಮತ್ತೆ
ಪುನಃ ಪುನಃ - ಮತ್ತೆ ಮತ್ತೆ
ಪುನರ್ಜನ್ಮ - ಮರುಹುಟ್ಟು
ಪುರಾತನ -ಹಳೆಯ , ಹಳೇಯ ( ಬಹಳ ಹಳೆಯ ಎಂದು ಒತ್ತು ಕೊಡಬೇಕಿದ್ದರೆ :) )
ಪುಷ್ಪ -ಹೂ
ಪ್ರಕಾಶ- ಬೆಳಕು
ಪ್ರಕಾಶನ ಮಾಡು , ಪ್ರಕಾಶಿಸು - ಬೆಳಕಿಗೆ ತರು
ಪ್ರಕೋಪ- ಸಿಟ್ಟು
ಪ್ರಗತಿ-ಏಳಿಗೆ
ಪ್ರತಿ -(ಪೂರ್ವಪ್ರತ್ಯಯ) ಎದುರು , ಇದಿರು , ಇದಿರಿಸು ಇತ್ಯಾದಿ
ಪ್ರತಿ -> (ಎ)ಇದಿರು
ಪ್ರತೀದಿನ - ದಿನವೊಂದಕ್ಕೂ ...
ಪ್ರತ್ಯಕ್ಷ - ನೇರ / ಕಣ್ಣಾರೆ
ಪ್ರತ್ಯೇಕ - ಬೇರೆಯೇ
ಪ್ರದಕ್ಷಿಣೆ- ತನ್ನತನ
ಪ್ರದೇಶ - ನಾಡು,ಸೀಮೆ
ಪ್ರಯತ್ನ - ಹವಣಿಕೆ
ಪ್ರಯತ್ನಿಸು - ಹವಣಿಸು
ಪ್ರವಹಿಸು - ಹರಿ
ಪ್ರವೇಶಿಸು - ಒಳಹೊಗು
ಪ್ರಶಂಸಿಸು - ಹೊಗಳು
ಪ್ರಶಂಸೆ - ಹೊಗಳಿಕೆ
ಪ್ರಶಂಸೆ- ಹೊಗಳಿಕೆ
ಪ್ರಸವ - ಹೆರಿಗೆ
ಪ್ರಸವಿಸು - ಹೆರು
ಪ್ರಸಿದ್ಧ - ಹೆಸರಾಂತ - ಹೆಸರುವಾಸಿ
ಪ್ರಸಿದ್ಧಿ- ಹೆಸರು
ಪ್ರಾಂತ್ಯ - ನಾಡು,ಸೀಮೆ
ಪ್ರಾಚೀನತೆ - ಹಳಮೆ
ಪ್ರೇಕ್ಷಣೀಯ - ನೋಡತಕ್ಕ
ಬಂದಿ /ಕೈದಿ - ಸೆರೆಯಾಳು
ಬಂಧನ - ಸೆರೆ
ಬಹಿರಂಗ - ಬಯಲು / ಹೊರಗು
ಬಹಿರಂಗ ಪಡಿಸು - ಬಯಲಿಗೆಳೆ , ಬಯಲುಮಾಡು
ಬಹಿರಂಗ-ಹೊರಗು
ಬಹಿರ್ದೆಸೆ-ಬಯಲಕಡೆ
ಬಾಹ್ಯಾಕಾಶ - ಹೊರ-ಆಗಸ
ಭಕ್ಷಿಸು - ತಿನ್ನು ( ತಿಂದು ಹಾಕು)
ಭಗ್ನಮಂದಿರ - ಪಾಳುಗುಡಿ
ಭರ್ತಿ ಮಾಡು - ತುಂಬು
ಭಾಗವಹಿಸು- ಪಾಲ್ಗೊಳ್ಳು
ಭಿಕ್ಷುಕ - ತಿರುಕ
ಭಿಕ್ಷೆ ಬೇಡು - ತಿರಿ
ಭಿನ್ನ , ಭಿನ್ನತೆ - ಬೇರೆ, ಬೇರೆತನ
ಭೂಕಂಪ - ನೆಲನಡುಕ
ಭೆಟ್ಟಿಯಾಗು - (ಬಂದು) ಕಾಣು , ನೋಡು
ಮಂದಸ್ಮಿತ- ಮುಗುಳ್ನಗೆ
ಮಂದಹಾಸ- ಮುಗುಳ್ನಗೆ
ಮರಣ - ಸಾವು
ಮಹಾದ್ವಾರ- ಹೆಬ್ಬಾಗಿಲು
ಮಾತೃಭಾಷೆ - ತಾಯ್ನುಡಿ
ಮಾತೃತ್ವ - ತಾಯ್ತನ
ಮಾನದಂಡ- ಅಳತೆಗೋಲು
ಮಾರ್ಗ - ಬೀದಿ
ಮುಕ್ತ -ತೆರೆದ , ಬಿಡುಗಡೆ ಹೊಂದಿದ
ಮುಕ್ತಿ - ಬಿಡುಗಡೆ
ಮೃತರಾಗು - ಸಾಯು , ತೀರಿ ಹೋಗು , ತೀರು
ಯಾಚನೆ - ಬೇಡುವಿಕೆ
ಯಾಚಿಸು - ಬೇಡು
ರಕ್ತ - ನೆತ್ತರು
ರಹಸ್ಯ - ಗುಟ್ಟು, (ಒಳ)ಗುಟ್ಟು
ರಾಜ- ಅರಸ
ರಾಜಮಾರ್ಗ - ರಾಜಬೀದಿ
ರಾಜ್ಯ - ನಾಡು,ಸೀಮೆ
ರೋದನ - ಅಳು
ಲಭಿಸು , ಲಭ್ಯವಾಗು - ದೊರಕು , ಸಿಗು
ಲೇಖನ - ಬರಹ
ಲೇಖನಿ - ಲೆಕ್ಕಣಿಕೆ
ವಚನ (ಕೊಡು) - ಮಾತು(ಕೊಡು)
ವರುಣ- ಮಳೆರಾಯ
ವಾಪಸ್ಸಾಗು - ಮರಳು
ವಾಯು - ಗಾಳಿ
ವಿಜೇತ - ಗೆದ್ದವ
ವಿತರಣೆ - ಹಂಚಿಕೆ
ವಿಧ - ಬಗೆ , ತೆರ
ವಿನಂತಿ- ಬಿನ್ನಹ
ವಿನ್ಯಾಸ - ಚಿತ್ತಾರ
ವಿವಾಹ, ಲಗ್ನ - ಮದುವೆ
ವಿಶ್ವಾಸ - ನಂಬುಗೆ
ವಿಸ್ಮಯ - ಸೋಜಿಗ
ವಿಳಂಬ - ತಡ
ವೃದ್ಧಿ - ಹೆಚ್ಚಳ
ವೃದ್ಧಿಸು - ಹೆಚ್ಚು , ಹೆಚ್ಚಿಸು
ವೈಶಿಷ್ಠ್ಯ - ವಿಶೇಷತೆ
ವ್ಯಾಪಿಸು - ಹರಡು
ವ್ಯಾಪ್ತಿ - ಹರಹು
ಶಾಖ - ಕಾವು
ಶಿಬಿರ - ಪಾಳ್ಯ
ಶಿಲೆ - ಕಲ್ಲು
ಶೀತಮಾರುತ - ಚಳಿಗಾಳಿ
ಶುದ್ಧ - ಅಪ್ಪಟ , ಅಚ್ಚ
ಶುಷ್ಕ- ಒಣ
ಶ್ಲಾಘನೆ - ಹೊಗಳಿಕೆ
ಶ್ಲಾಘಿಸು - ಹೊಗಳು
ಶ್ವಾಸ- ಉಸಿರು
ಸಂಬಂಧ- ನಂ(ನೆಂ)ಟು, ನೆಂಟಸ್ತಿಕೆ , ನೆಂಟಸ್ತನ
ಸಂಬಂಧಿ(ಕ) - ನೆಂಟ
ಸಂಭವಿಸು - ಜರುಗು , ಉಂಟಾಗು , ಆಗು
ಸಂವಾದ - ಮಾತುಕತೆ
ಸತ್ಯ - ನಿಜ , ದಿಟ
ಸನ್ನಿಹಿತವಾಗು - ಹತ್ತಿರ ಬರು
ಸನ್ಮಾನ -ಮರ್ಯಾದೆ
ಸಮಯ-ಹೊತ್ತು
ಸಮಾಧಾನ ಮಾಡು - ಸಂತೈಸು
ಸಮಾಸ - ಕೂಡುನುಡಿ
ಸರ್ವ - ಎಲ್ಲ
ಸರ್ವವಿದಿತ- ಎಲ್ಲರಿಗೂ ಗೊತ್ತು.
ಸುವರ್ಣ - ಚಿನ್ನ , ಬಂಗಾರ
ಸೂಕ್ತ - ಸರಿಯಾದ
ಸೈನ್ಯ - ದಂಡು
ಸ್ಟ್ರಿಕ್ಟ್ - ಕಟ್ಟುನಿಟ್ಟು , ಬಿಗಿ
ಸ್ಥಗಿತ- ನಿಲುಗಡೆ
ಸ್ಥಗಿತಗೊಳಿಸು- ನಿಲ್ಲಿಸು
ಸ್ಥಳ - ಎಡೆ
ಸ್ಪರ್ಧಾತ್ಮಕ - ಪೈಪೋಟಿಯ
ಸ್ಪರ್ಧೆ - ಪೈಪೋಟಿ, ಮೇಲಾಟ
ಸ್ಪಷ್ಟ - ನಿಚ್ಚಳ
ಸ್ಮರಣಾರ್ಥ - ನೆನಪಿನಲ್ಲಿ, ನೆನಪಿಗಾಗಿ
ಸ್ಮರಣೆ - ನೆನಪು
ಸ್ಮರಿಸು - ನೆನೆ
ಸ್ಮೃತಿ- ನೆನಪು
ಸ್ವಂತ - ತ(ನ)ನ್ನದು
ಸ್ವಂತಿಕೆ - ತನ್ನತನ
ಸ್ವಚ್ಛ- ಚೊಕ್ಕಟ
ಸ್ವಾಗತಿಸು - ಎದುರ್ಗೊಳ್ಳು
ಸ್ವಾಗತಿಸು - ಬರಮಾಡಿಕೋ, ಇದಿರುಗೊಳ್ಳು
ಸ್ವೀಕರಿಸು - ತೆಗೆದುಕೋ ,ಒಪ್ಪಿಕೋ
ಹಸ್ತಾಂತರಿಸು - ಕೈಗೊಪ್ಪಿಸು
ಹಸ್ತಾಕ್ಷರ - ಕೈಬರಹ
Tuesday, July 15, 2008
ಸುಲಭಕನ್ನಡಕೈಗನ್ನಡಿ- (ಆವೃತ್ತಿ ೧.೦)
ನೀವು ಏನಾದರೂ ಬರೆಯುತ್ತಾ ಇದ್ದರೆ ಈ ಕೆಳಗಿನ ಪಟ್ಟಿ ನೋಡಿ. ಇಲ್ಲಿನ ಶಬ್ದವನ್ನ ನೀವು ಬಳಸಿದ್ದರೆ ಅದರ ಬದಲಾಗಿ ಅದರ ಮುಂದೆ ಕೊಟ್ಟಿರುವ ಸುಲಭಕನ್ನಡ ಶಬ್ದ ಬಳಸಬಹುದೋ ನೋಡಿ ..
ಸುಲಭವಾಗಿ ತಿಳಿಯದ ಇಲ್ಲಿನ ಅನೇಕ ಶಬ್ದಗಳನ್ನು ದಿನಪತ್ರಿಕೆಯೊಂದರಿಂದಲೇ ಆಯ್ದುಕೊಂಡು ಅವುಗಳ ಬದಲಿಗೆ ಬಳಸಬಹುದಾದವನ್ನು (ಆಹಾ ! - ಕನ್ನಡದ ಶಕ್ತಿಯೇ !!) .. ಒಂದೆರಡನ್ನು ಬಿಟ್ಟು ಉಳಿದವನ್ನೆಲ್ಲ ಕೂಡಲೇ ಬಳಸಬಹುದಾಗಿದೆ.
ಈ ಸಂಗ್ರಹಕ್ಕೆ ಏನಾದರೂ ಸೇರಿಸಬಹುದಿದ್ದರೆ ತಿಳಿಸಿ ..
ಅಕಸ್ಮಾತ್ ಪಳಚ್ಚನೆ
ಅಗೋಚರ ಕಾಣದ
ಅಗ್ನಿ ಬೆಂಕಿ
ಅಗ್ನಿಜ್ವಾಲೆ ಬೆಂಕಿಯ ನಾಲಗೆ
ಅನತಿಕಾಲದಲ್ಲಿ ತಡವಿಲ್ಲದೆ
ಅಪಜಯ/ಪರಾಜಯ ಸೋಲು
ಅವಿಸ್ಮರಣೀಯ ಮರೆಯಲಾಗದ
ಅಷ್ಟಮ ಎಂಟನೇ
ಅಸತ್ಯ ಸುಳ್ಳು,ಸಟೆ
ಆಗ್ರಹ ಒತ್ತಾಯ
ಆಗ್ರಹಿಸು ಒತ್ತಾಯಿಸು
ಆಶ್ರಯ ಆಸರೆ
ಆಷ್ಟ ಎಂಟು
ಉಗಮವಾಗು ಹುಟ್ಟು
ಉತ್ಸವ ಹಬ್ಬ
ಉದ್ದೇಶಿಸಿ ಕುರಿತು
ಉದ್ಧರಿಸು ಮೇಲಕ್ಕೆತ್ತು
ಉದ್ಧಾರ ಮೇಲಕ್ಕೆತ್ತುವಿಕೆ
ಉದ್ಭವ ಹುಟ್ಟಿಕೊಂಡ
ಉದ್ಭವವಾಗು ಹುಟ್ಟಿಕೋ
ಉನ್ನತ ಎತ್ತರದ
ಉಪಸ್ಥಿತರಿರು ಹಾಜರಿರು
ಏಕಾಂಗಿ ಒಬ್ಬಂಟಿ
ಏಕಾಂಗಿತನ ಒಬ್ಬಂಟಿತನ
ಕರ್ತವ್ಯ ಮಾಡತಕ್ಕುದು
ಕಲಹ ಜಗಳ
ಕಾರ್ಪೆಂಟರ್ ಮರಗೆಲಸಕಾರ
ಕಾರ್ಯನಿರ್ವಹಿಸು ಕೆಲಸಮಾಡು
ಕೃತ್ಯ ಕೆಲಸ
ಕೈದಿ ಸೆರೆಯಾಳು
ಕ್ಷೀರಸಮುದ್ರ ಹಾಲ್ಗಡಲು
ಚತುರ್ಥ ನಾಲ್ಕನೇ
ಛಿದ್ರಗೊಳ್ಳು -ಒಡೆ
ಜನಿಸು ಹುಟ್ಟು
ಜನ್ಮ ಹುಟ್ಟು
ಜಯ ಗೆಲುವು
ಜ್ಞಾಪಕ ನೆನಪು
ಜ್ಞಾಪಕಾರ್ಥ ನೆನಪಿನಲ್ಲಿ, ನೆನಪಿಗಾಗಿ, ನೆನಪಿಗೋಸ್ಕರ
ಜ್ಞಾಪಿಸು ನೆನಪಿಸು
ತನುಮನ ಮೈಮನ
ತೃತೀಯ ಮೂರನೇ
ತೃಷೆ(ಲೈಂಗಿಕ) ಲೈಂಗಿಕ ಹಸಿವು
ತೈಲ ಎಣ್ಣೆ
ತ್ಯಜಿಸು ಬಿಟ್ಟುಬಿಡು
ತ್ರಿ/ತ್ರಯ ಮೂರು
ದ್ವಯ ಜ(ಜೊ)ತೆ
ದ್ವಿ ಎರಡು
ದ್ವಿತೀಯ ಎರಡನೇ
ಧೃಡ ಗಟ್ಟಿ
ಧ್ವಜ ಬಾವುಟ
ನಗ್ನ ಬೆತ್ತಲೆ
ನವ ಹೊಸ/ಒಂಬತ್ತು
ನವನವೀನ ಹೊಚ್ಚಹೊಸತು
ನವಮ ಒಂಭತ್ತನೇ
ನಾಮಕರಣಮಾಡು ಹೆಸರಿಡು
ನಾವೀನ್ಯ ಹೊಸತು
ನಿರೀಕ್ಷಿಸು ಎ(ಇ)ದಿರುನೋಡು
ನೇತಾರ ಮುಂದಾಳು
ನೇತೃತ್ವ ಮುಂದಾಳುತನ
ಪಂಚ ಐದು
ಪಂಚಮ ಐದನೇ
ಪರಸ್ಪರ ಒಬ್ಬರನ್ನೊಬ್ಬರು
ಪರಾಜಿತ ಸೋತವ
ಪರಿಗಣನೆ ಎಣಿಕೆ
ಪರಿಗಣಿಸಿ ಎಣಿಸು , ಲೆಕ್ಕಕ್ಕೆ ತೆಗೆದುಕೋ
ಪಶ್ಚಾತ್ತಾಪ ಹಿನ್ನೋವು
ಪಾಣಿಗ್ರಹಣಮಾಡು ಕೈಹಿಡಿ
ಪಾರಂಗತ ನಿಪುಣ,ಕೋವಿದ
ಪಾರ್ಶ್ವ ಮಗ್ಗಲು, ಪಕ್ಕ , ಬದಿ
ಪುನಃ/ಪುನರ್ ಮತ್ತೆ/ಮರು
ಪುನಃಪುನಃ ಮತ್ತೆಮತ್ತೆ
ಪುನರ್ಜನ್ಮ ಮರುಹುಟ್ಟು
ಪುಷ್ಪ ಹೂ
ಪೂಜನೀಯ ಪೂಜಿಸತಕ್ಕ
ಪೂರ್ವ ಮುನ್ನ
ಪ್ರತಿ... ಇದಿರು...
ಪ್ರಥಮ ಮೊದಲ
ಪ್ರೇಕ್ಷಣೀಯ ನೋಡತಕ್ಕ
ಬಂದಿ ಸೆರೆಯಾಳು
ಬೃಹತ್ ದೊಡ್ಡ
ಭಕ್ಷಿಸು ತಿನ್ನು
ಭಕ್ಷ್ಯ ತಿಂಡಿ, ತಿನಿಸು
ಭಕ್ಷ್ಯಭೋಜ್ಯ ತಿನಿಸು-ಉಣಿಸು
ಭಯ ಹೆದರಿಕೆ / ಅಂಜಿಕೆ
ಭಯಾನಕ/ಭಯಾವಹ ಅಂಜಿಕೆ(ಹೆದರಿಕೆ)ಯನ್ನುಂಟು ಮಾಡುವ
ಭಾಗವಹಿಸು ಪಾಲ್ಗೊಳ್ಳು
ಭೀತ ಅಂಜಿದ/ ಹೆದರಿದ
ಭೀತಿ ಹೆದರಿಕೆ / ಅಂಜಿಕೆ
ಭೂಕಂಪ ನೆಲನಡುಕ
ಮರಣ ಸಾವು
ಮಾತೃತ್ವ ತಾಯ್ತನ, ತಾಯಿತನ
ಮಾರ್ಗ ದಾರಿ
ಮಾರ್ಗ ದಾರಿ
ಮುಕ್ತ.. ತೆರೆದ..
ಮುಕ್ತಿ ಬಿಡುಗಡೆ
ಮೃತದೇಹ ಹೆಣ
ಮೃತರಾಗು ಸಾಯು
ಮೌಲ್ಯಮಾಪನ ಬೆಲೆಕಟ್ಟುವಿಕೆ
ಯಾಚಿಸು ಬೇಡು
ರಂಧ್ರ ತೂತು
ರಕ್ಷಣೆಗೆ ಕಾಯಲು/ಕಾಪಾಡಲು
ರಕ್ಷಿಸು ಕಾಪಾಡು
ಲೇಖಕ ಬರಹಗಾರ
ಲೇಖಕಿ ಬರಹಗಾತಿ
ಲೇಖನ ಬರಹ
ವಂಚನೆ ಮೋಸ
ವಂಚಿಸು ಮೋಸಗೊಳಿಸು / ಮೋಸ ಮಾಡು
ವಶಕ್ಕೆ ಕೈಗೆ
ವಾಪಸ್ ಮರಳಿ
ವಿಜೇತ ಗೆದ್ದವ
ವಿತರಣೆ ಹಂಚಿಕೆ
ವಿತರಿಸು ಹಂಚು
ವಿನ್ಯಾಸ ಚಿತ್ತಾರ
ವೃದ್ಧಿ ಹೆಚ್ಚಳ
ವೃದ್ಧಿಸು ಹೆಚ್ಚು/ಹೆಚ್ಚಾಗು/ಹೆಚ್ಚಿಸು/ಹೆಚ್ಚುಮಾಡು
ವೈಶಿಷ್ಟ್ಯ ವಿಶೇಷತೆ
ವ್ಯಾಪಿಸು ಹರಡು
ವ್ಯಾಪ್ತಿ ಹರಡು
ಶೀಘ್ರ ಬೇಗ
ಶೀತ ಚಳಿ
ಶೀತಮಾರುತ ಚಳಿಗಾಳಿ
ಶುದ್ಧ ಅಪ್ಪಟ
ಷಡ್ರಿಪು ಆರುವೈರಿಗಳು
ಸಂಘರ್ಷ ತಿಕ್ಕಾಟ
ಸಂಬಂಧ ನ(ನೆ)ಂಟು , ನ(ನೆ)ಂಟಸ್ತಿಕೆ
ಸಂವಾದ ಮಾತುಕತೆ
ಸತ್ಯ ದಿಟ
ಸನ್ನಿಹಿತವಾಗು ಹತ್ತಿರಬರು
ಸಪ್ತ ಏಳು
ಸಪ್ತಮ ಏಳನೇ
ಸಮುದ್ರ ಕಡಲು
ಸಮ್ಮಿಲಿತ ಸೇರ್ಪಡೆ
ಸಮ್ಮಿಶ್ರ ಬೆರಕೆ
ಸೂಕ್ತ ಸರಿಯಾದ
ಸೂಚಿ ಪಟ್ಟಿ
ಸ್ಟ್ರಿಕ್ಟ್ ಕಟ್ಟುನಿಟ್ಟು
ಸ್ಪರ್ಧಾತ್ಮಕ ಪೈಪೋಟಿಯ
ಸ್ಪರ್ಧೆ ಪೈಪೋಟಿಯ
ಸ್ಪಷ್ಟ ನಿಚ್ಚಳ
ಸ್ಫೋಟ ಸಿಡಿತ
ಸ್ಮರಣೆ ನೆನಪು
ಸ್ಮರಿಸು ನೆನೆ
ಹಂತಕ ಕೊಲೆಗಾರ
ಹತ್ಯೆ ಕೊಲೆ
ಹೃದಯ ಎದೆ
ಸುಲಭವಾಗಿ ತಿಳಿಯದ ಇಲ್ಲಿನ ಅನೇಕ ಶಬ್ದಗಳನ್ನು ದಿನಪತ್ರಿಕೆಯೊಂದರಿಂದಲೇ ಆಯ್ದುಕೊಂಡು ಅವುಗಳ ಬದಲಿಗೆ ಬಳಸಬಹುದಾದವನ್ನು (ಆಹಾ ! - ಕನ್ನಡದ ಶಕ್ತಿಯೇ !!) .. ಒಂದೆರಡನ್ನು ಬಿಟ್ಟು ಉಳಿದವನ್ನೆಲ್ಲ ಕೂಡಲೇ ಬಳಸಬಹುದಾಗಿದೆ.
ಈ ಸಂಗ್ರಹಕ್ಕೆ ಏನಾದರೂ ಸೇರಿಸಬಹುದಿದ್ದರೆ ತಿಳಿಸಿ ..
ಅಕಸ್ಮಾತ್ ಪಳಚ್ಚನೆ
ಅಗೋಚರ ಕಾಣದ
ಅಗ್ನಿ ಬೆಂಕಿ
ಅಗ್ನಿಜ್ವಾಲೆ ಬೆಂಕಿಯ ನಾಲಗೆ
ಅನತಿಕಾಲದಲ್ಲಿ ತಡವಿಲ್ಲದೆ
ಅಪಜಯ/ಪರಾಜಯ ಸೋಲು
ಅವಿಸ್ಮರಣೀಯ ಮರೆಯಲಾಗದ
ಅಷ್ಟಮ ಎಂಟನೇ
ಅಸತ್ಯ ಸುಳ್ಳು,ಸಟೆ
ಆಗ್ರಹ ಒತ್ತಾಯ
ಆಗ್ರಹಿಸು ಒತ್ತಾಯಿಸು
ಆಶ್ರಯ ಆಸರೆ
ಆಷ್ಟ ಎಂಟು
ಉಗಮವಾಗು ಹುಟ್ಟು
ಉತ್ಸವ ಹಬ್ಬ
ಉದ್ದೇಶಿಸಿ ಕುರಿತು
ಉದ್ಧರಿಸು ಮೇಲಕ್ಕೆತ್ತು
ಉದ್ಧಾರ ಮೇಲಕ್ಕೆತ್ತುವಿಕೆ
ಉದ್ಭವ ಹುಟ್ಟಿಕೊಂಡ
ಉದ್ಭವವಾಗು ಹುಟ್ಟಿಕೋ
ಉನ್ನತ ಎತ್ತರದ
ಉಪಸ್ಥಿತರಿರು ಹಾಜರಿರು
ಏಕಾಂಗಿ ಒಬ್ಬಂಟಿ
ಏಕಾಂಗಿತನ ಒಬ್ಬಂಟಿತನ
ಕರ್ತವ್ಯ ಮಾಡತಕ್ಕುದು
ಕಲಹ ಜಗಳ
ಕಾರ್ಪೆಂಟರ್ ಮರಗೆಲಸಕಾರ
ಕಾರ್ಯನಿರ್ವಹಿಸು ಕೆಲಸಮಾಡು
ಕೃತ್ಯ ಕೆಲಸ
ಕೈದಿ ಸೆರೆಯಾಳು
ಕ್ಷೀರಸಮುದ್ರ ಹಾಲ್ಗಡಲು
ಚತುರ್ಥ ನಾಲ್ಕನೇ
ಛಿದ್ರಗೊಳ್ಳು -ಒಡೆ
ಜನಿಸು ಹುಟ್ಟು
ಜನ್ಮ ಹುಟ್ಟು
ಜಯ ಗೆಲುವು
ಜ್ಞಾಪಕ ನೆನಪು
ಜ್ಞಾಪಕಾರ್ಥ ನೆನಪಿನಲ್ಲಿ, ನೆನಪಿಗಾಗಿ, ನೆನಪಿಗೋಸ್ಕರ
ಜ್ಞಾಪಿಸು ನೆನಪಿಸು
ತನುಮನ ಮೈಮನ
ತೃತೀಯ ಮೂರನೇ
ತೃಷೆ(ಲೈಂಗಿಕ) ಲೈಂಗಿಕ ಹಸಿವು
ತೈಲ ಎಣ್ಣೆ
ತ್ಯಜಿಸು ಬಿಟ್ಟುಬಿಡು
ತ್ರಿ/ತ್ರಯ ಮೂರು
ದ್ವಯ ಜ(ಜೊ)ತೆ
ದ್ವಿ ಎರಡು
ದ್ವಿತೀಯ ಎರಡನೇ
ಧೃಡ ಗಟ್ಟಿ
ಧ್ವಜ ಬಾವುಟ
ನಗ್ನ ಬೆತ್ತಲೆ
ನವ ಹೊಸ/ಒಂಬತ್ತು
ನವನವೀನ ಹೊಚ್ಚಹೊಸತು
ನವಮ ಒಂಭತ್ತನೇ
ನಾಮಕರಣಮಾಡು ಹೆಸರಿಡು
ನಾವೀನ್ಯ ಹೊಸತು
ನಿರೀಕ್ಷಿಸು ಎ(ಇ)ದಿರುನೋಡು
ನೇತಾರ ಮುಂದಾಳು
ನೇತೃತ್ವ ಮುಂದಾಳುತನ
ಪಂಚ ಐದು
ಪಂಚಮ ಐದನೇ
ಪರಸ್ಪರ ಒಬ್ಬರನ್ನೊಬ್ಬರು
ಪರಾಜಿತ ಸೋತವ
ಪರಿಗಣನೆ ಎಣಿಕೆ
ಪರಿಗಣಿಸಿ ಎಣಿಸು , ಲೆಕ್ಕಕ್ಕೆ ತೆಗೆದುಕೋ
ಪಶ್ಚಾತ್ತಾಪ ಹಿನ್ನೋವು
ಪಾಣಿಗ್ರಹಣಮಾಡು ಕೈಹಿಡಿ
ಪಾರಂಗತ ನಿಪುಣ,ಕೋವಿದ
ಪಾರ್ಶ್ವ ಮಗ್ಗಲು, ಪಕ್ಕ , ಬದಿ
ಪುನಃ/ಪುನರ್ ಮತ್ತೆ/ಮರು
ಪುನಃಪುನಃ ಮತ್ತೆಮತ್ತೆ
ಪುನರ್ಜನ್ಮ ಮರುಹುಟ್ಟು
ಪುಷ್ಪ ಹೂ
ಪೂಜನೀಯ ಪೂಜಿಸತಕ್ಕ
ಪೂರ್ವ ಮುನ್ನ
ಪ್ರತಿ... ಇದಿರು...
ಪ್ರಥಮ ಮೊದಲ
ಪ್ರೇಕ್ಷಣೀಯ ನೋಡತಕ್ಕ
ಬಂದಿ ಸೆರೆಯಾಳು
ಬೃಹತ್ ದೊಡ್ಡ
ಭಕ್ಷಿಸು ತಿನ್ನು
ಭಕ್ಷ್ಯ ತಿಂಡಿ, ತಿನಿಸು
ಭಕ್ಷ್ಯಭೋಜ್ಯ ತಿನಿಸು-ಉಣಿಸು
ಭಯ ಹೆದರಿಕೆ / ಅಂಜಿಕೆ
ಭಯಾನಕ/ಭಯಾವಹ ಅಂಜಿಕೆ(ಹೆದರಿಕೆ)ಯನ್ನುಂಟು ಮಾಡುವ
ಭಾಗವಹಿಸು ಪಾಲ್ಗೊಳ್ಳು
ಭೀತ ಅಂಜಿದ/ ಹೆದರಿದ
ಭೀತಿ ಹೆದರಿಕೆ / ಅಂಜಿಕೆ
ಭೂಕಂಪ ನೆಲನಡುಕ
ಮರಣ ಸಾವು
ಮಾತೃತ್ವ ತಾಯ್ತನ, ತಾಯಿತನ
ಮಾರ್ಗ ದಾರಿ
ಮಾರ್ಗ ದಾರಿ
ಮುಕ್ತ.. ತೆರೆದ..
ಮುಕ್ತಿ ಬಿಡುಗಡೆ
ಮೃತದೇಹ ಹೆಣ
ಮೃತರಾಗು ಸಾಯು
ಮೌಲ್ಯಮಾಪನ ಬೆಲೆಕಟ್ಟುವಿಕೆ
ಯಾಚಿಸು ಬೇಡು
ರಂಧ್ರ ತೂತು
ರಕ್ಷಣೆಗೆ ಕಾಯಲು/ಕಾಪಾಡಲು
ರಕ್ಷಿಸು ಕಾಪಾಡು
ಲೇಖಕ ಬರಹಗಾರ
ಲೇಖಕಿ ಬರಹಗಾತಿ
ಲೇಖನ ಬರಹ
ವಂಚನೆ ಮೋಸ
ವಂಚಿಸು ಮೋಸಗೊಳಿಸು / ಮೋಸ ಮಾಡು
ವಶಕ್ಕೆ ಕೈಗೆ
ವಾಪಸ್ ಮರಳಿ
ವಿಜೇತ ಗೆದ್ದವ
ವಿತರಣೆ ಹಂಚಿಕೆ
ವಿತರಿಸು ಹಂಚು
ವಿನ್ಯಾಸ ಚಿತ್ತಾರ
ವೃದ್ಧಿ ಹೆಚ್ಚಳ
ವೃದ್ಧಿಸು ಹೆಚ್ಚು/ಹೆಚ್ಚಾಗು/ಹೆಚ್ಚಿಸು/ಹೆಚ್ಚುಮಾಡು
ವೈಶಿಷ್ಟ್ಯ ವಿಶೇಷತೆ
ವ್ಯಾಪಿಸು ಹರಡು
ವ್ಯಾಪ್ತಿ ಹರಡು
ಶೀಘ್ರ ಬೇಗ
ಶೀತ ಚಳಿ
ಶೀತಮಾರುತ ಚಳಿಗಾಳಿ
ಶುದ್ಧ ಅಪ್ಪಟ
ಷಡ್ರಿಪು ಆರುವೈರಿಗಳು
ಸಂಘರ್ಷ ತಿಕ್ಕಾಟ
ಸಂಬಂಧ ನ(ನೆ)ಂಟು , ನ(ನೆ)ಂಟಸ್ತಿಕೆ
ಸಂವಾದ ಮಾತುಕತೆ
ಸತ್ಯ ದಿಟ
ಸನ್ನಿಹಿತವಾಗು ಹತ್ತಿರಬರು
ಸಪ್ತ ಏಳು
ಸಪ್ತಮ ಏಳನೇ
ಸಮುದ್ರ ಕಡಲು
ಸಮ್ಮಿಲಿತ ಸೇರ್ಪಡೆ
ಸಮ್ಮಿಶ್ರ ಬೆರಕೆ
ಸೂಕ್ತ ಸರಿಯಾದ
ಸೂಚಿ ಪಟ್ಟಿ
ಸ್ಟ್ರಿಕ್ಟ್ ಕಟ್ಟುನಿಟ್ಟು
ಸ್ಪರ್ಧಾತ್ಮಕ ಪೈಪೋಟಿಯ
ಸ್ಪರ್ಧೆ ಪೈಪೋಟಿಯ
ಸ್ಪಷ್ಟ ನಿಚ್ಚಳ
ಸ್ಫೋಟ ಸಿಡಿತ
ಸ್ಮರಣೆ ನೆನಪು
ಸ್ಮರಿಸು ನೆನೆ
ಹಂತಕ ಕೊಲೆಗಾರ
ಹತ್ಯೆ ಕೊಲೆ
ಹೃದಯ ಎದೆ
Monday, September 11, 2006
ಕನ್ನಡದ ಕಲಿಕೆ - ಕನ್ನಡಿಗನಿಂದ ಅರ್ಧಾಯುಷ್ಯದ ನಂತರ!
ಕನ್ನಡದ ಪದಗಳನ್ನು ಗುರುತಿಸುವಲ್ಲಿ ಸಂಗನಗೌಡರು ಕೊಟ್ಟ ವಿಚಾರ ಬಹಳ ಸಹಾಯಕವಾಗಿದೆ.( ಒತ್ತಕ್ಕರ ಕುರಿತಾಗಿ)ಈಗ ಶಬ್ದಕೋಶ(ಗುರುನಾಥ ಜೋಷಿಯವರದು) ವೊಂದನ್ನು ತಿರುವಿ ಹಾಕುತ್ತಿದ್ದೇನೆ.ಕನ್ನಡಶಬ್ದಕೋಶದಲ್ಲಿ ಅಗತ್ಯ ಮೀರಿ ಸಂಸ್ಕೃತ ಶಬ್ದಗಳು ಬಹಳ ಸೇರಿಕೊಂಡಿವೆ ಅನಿಸಿತು.
ಕಂಕರೀಟ - (concrete) ಎಂಬ ಪದವೂ ಅಲ್ಲಿ ಸೇರಿಕೊಂಡಿದೆ.
ಈಗೀಗ ನಾನು ಬರೆಯುವಾಗ ನಾನು ಬರೆಯುವ ಪದಗಳ ಕುರಿತಾಗಿ ಗಮನ ಹರಿಸುತ್ತಿದ್ದೇನೆ. ಆಡು ಮಾತಿನ್ನಲಿರುವ ಅಚ್ಚ ಕನ್ನದ ಪದಗಳನ್ನೂ ನೆನೆಯುತ್ತಿದ್ದೇನೆ /ನೆನಪಿಸಿಕೊಳ್ಳುತ್ತಿದ್ದೇನೆ .ಸಾಧ್ಯ( ಸಹಜ, ವ್ಯಾವಹಾರಿಕವೆಂದು ಕಾಣುವಲ್ಲಿ ) ವಿದ್ದಲ್ಲಿ ಕನ್ನಡ ಪದ ಬಳಸುತ್ತಿದ್ದೇನೆ. ಅದೇ ಉದ್ದೇಶದಿಂದಲೇ ಶಬ್ದಕೋಶವನ್ನು ತಿರುವಿ ಹಾಕುತ್ತಿದ್ದೇನೆ.
ಶೀರ್ಷಿಕೆ - ತಲೆಬರಹ ಲೇಖನ, ಲೇಖಕ - ಬರಹ , ಬರಹಗಾರ ಉಪಯೋಗ, ಉಪಯೋಗಿಸು .- ಬಳಕೆ , ಬಳಸು( ಬಳಕೆ ಮಾಡು)ವ್ಯಾಪಿಸು - ಹರಡು ನಾಯಕ - ಮುಂದಾಳು ಸ್ವಾಗತಿಸು - ಇ(ಎ)ದಿರುಗೊಳ್ಳು
ಇತ್ಯಾದಿ .
ಶಬ್ದಕೋಶವನ್ನೋದುವಾಗ , ಅಚ್ಚಕನ್ನಡ ಶಬ್ದಗಳು , ಅದರಿಂದುಂಟಾಗುವ ಶಬ್ದಗಳ ಸಮೂಹ ಇತ್ಯಾದಿ ಗಮನದಲ್ಲಿಡುತ್ತಿದ್ದೇನೆ.
ಅಚ್ಚಕನ್ನಡ ಪದಕೋಶವೆಂಬುದು ಬಿಡುಗಡೆಯಾಗಿದೆಯಂತೆ . ಅದನ್ನು ಕೊಂಡು ಓದಬೇಕು.
ಕಂಕರೀಟ - (concrete) ಎಂಬ ಪದವೂ ಅಲ್ಲಿ ಸೇರಿಕೊಂಡಿದೆ.
ಈಗೀಗ ನಾನು ಬರೆಯುವಾಗ ನಾನು ಬರೆಯುವ ಪದಗಳ ಕುರಿತಾಗಿ ಗಮನ ಹರಿಸುತ್ತಿದ್ದೇನೆ. ಆಡು ಮಾತಿನ್ನಲಿರುವ ಅಚ್ಚ ಕನ್ನದ ಪದಗಳನ್ನೂ ನೆನೆಯುತ್ತಿದ್ದೇನೆ /ನೆನಪಿಸಿಕೊಳ್ಳುತ್ತಿದ್ದೇನೆ .ಸಾಧ್ಯ( ಸಹಜ, ವ್ಯಾವಹಾರಿಕವೆಂದು ಕಾಣುವಲ್ಲಿ ) ವಿದ್ದಲ್ಲಿ ಕನ್ನಡ ಪದ ಬಳಸುತ್ತಿದ್ದೇನೆ. ಅದೇ ಉದ್ದೇಶದಿಂದಲೇ ಶಬ್ದಕೋಶವನ್ನು ತಿರುವಿ ಹಾಕುತ್ತಿದ್ದೇನೆ.
ಶೀರ್ಷಿಕೆ - ತಲೆಬರಹ ಲೇಖನ, ಲೇಖಕ - ಬರಹ , ಬರಹಗಾರ ಉಪಯೋಗ, ಉಪಯೋಗಿಸು .- ಬಳಕೆ , ಬಳಸು( ಬಳಕೆ ಮಾಡು)ವ್ಯಾಪಿಸು - ಹರಡು ನಾಯಕ - ಮುಂದಾಳು ಸ್ವಾಗತಿಸು - ಇ(ಎ)ದಿರುಗೊಳ್ಳು
ಇತ್ಯಾದಿ .
ಶಬ್ದಕೋಶವನ್ನೋದುವಾಗ , ಅಚ್ಚಕನ್ನಡ ಶಬ್ದಗಳು , ಅದರಿಂದುಂಟಾಗುವ ಶಬ್ದಗಳ ಸಮೂಹ ಇತ್ಯಾದಿ ಗಮನದಲ್ಲಿಡುತ್ತಿದ್ದೇನೆ.
ಅಚ್ಚಕನ್ನಡ ಪದಕೋಶವೆಂಬುದು ಬಿಡುಗಡೆಯಾಗಿದೆಯಂತೆ . ಅದನ್ನು ಕೊಂಡು ಓದಬೇಕು.
Saturday, September 09, 2006
ಕಂಪ್ಯೂಟರ್ ಸಂಬಂಧಿ ಶಬ್ದಗಳು- ನನ್ನ ಅನುವಾದ
welcome-ಸ್ವಾಗತಿಸು - ಎದಿರ್ಗೊಳ್ಳು
overview (ಪಕ್ಷಿನೋಟ) - ಮೇಲ್ನೋಟ
updation( ಪರಿಷ್ಕಾರ) - ತಿದ್ದುಪಡಿ , ತಿದ್ದುಪಾಟು
enable - ಸಕ್ರಿಯಗೊಳಿಸು
disable - ನಿಷ್ಕ್ರಿಯಗೊಳಿಸು
options - ಆಯ್ಕೆಗಳು
HTML - ಅತಿಪಠ್ಯ
script - ತಂತ್ರವಿಧಿ
subscription - ಚಂದಾದಾರಿಕೆ
cancel - ರದ್ದುಮಾಡು
edit- ತಿದ್ದು
overview (ಪಕ್ಷಿನೋಟ) - ಮೇಲ್ನೋಟ
updation( ಪರಿಷ್ಕಾರ) - ತಿದ್ದುಪಡಿ , ತಿದ್ದುಪಾಟು
enable - ಸಕ್ರಿಯಗೊಳಿಸು
disable - ನಿಷ್ಕ್ರಿಯಗೊಳಿಸು
options - ಆಯ್ಕೆಗಳು
HTML - ಅತಿಪಠ್ಯ
script - ತಂತ್ರವಿಧಿ
subscription - ಚಂದಾದಾರಿಕೆ
cancel - ರದ್ದುಮಾಡು
edit- ತಿದ್ದು
Thursday, September 07, 2006
ಸಂಗನಗೌಡರೆಂಬವರ 'ಬಲಾಗಿನಿಂದ' ನಾನು ಒಪ್ಪುವ ವಿಚಾರ
ಅವರ ಬ್ಲಾಗ್ http://obbakannadiga.blogspot.com/
ಕೆಲವನ್ನು ಒಪ್ಪಲಾಗದು ( ಮಹಾಪ್ರಾಣಗಳ ಕೈಬಿಡುವಿಕೆ, ವ್ಯಾಕರಣವನ್ನು ಬೇಗರಣ/ ವ್ಯಂಜನವನ್ನು ಬೆಂಜನ ಎನ್ನುವದು)
ಒಪ್ಪುವ ವಿಚಾರ.
ಒತ್ತಕ್ಕರ ಕಟ್ಟಳೆ :- ಒತ್ತು+ಅಕ್ಕರ ( ಒತ್ತು ಅಕ್ಷರ ). ಅಂದರೆ ಕನ್ನಡದಲ್ಲಿ ಒಂದು ಅಕ್ಕರವನ್ನು ಒತ್ತಿ ಹೇಳುವದನ್ನು, ಬರೆಯುವಾಗ, ಆ ಅಕ್ಕರದ ಕೆಳಗೆ ಅದೇ ಅಕ್ಕರವನ್ನು ಬರೆಯಲಾಗುತ್ತದೆ.ಉದಾ: ಕಲ್ಲು, ಮುಳ್ಳು, ಸುಳ್ಳು, ಅಕ್ಕರೆ, ಸಕ್ಕರೆ, ಅಗ್ಗ, ಹಿಗ್ಗು, ಸುಗ್ಗಿ, ನುಗ್ಗು, ಪಕ್ಕ, ಚುಕ್ಕ ಹೀಗೆ ಹಲವಾರು.ಪೊಳ್ಳು, ಗೊಳ್ಳು, ಗೊಡ್ಡು, ಮುತ್ತು, ಸುತ್ತು, ತುತ್ತು, ಕತ್ತು, ಕುತ್ತು, ಸೊತ್ತು. ಬಹಳ ಇವೆ.ಕಟ್ಟಳೆಯ ಉಲ್ಲಂಗನೆ :- ಒತ್ತಕ್ಕರ ಎಂಬ ಪದದಲ್ಲಿಯೇ 'ಒತ್ತು' ಇದೆ. ಅಂದರೆ ಆ ಅಕ್ಕರವನ್ನು ಒತ್ತಿ ಹೇಳುವುದು. ಒಂದು ಅಕ್ಕರದ ಕೆಳಗೆ ಇನ್ನೊಂದು ಅಕ್ಕರವನ್ನು ಬರೆದರೆ(ಉದಾ: ಪ್ರ), ಅದು ಬೆರಕೆಯಾಗುತ್ತದೆ, ಒತ್ತಕ್ಕರ ಹೇಗಾಗುತ್ತದೆ? ಇದರಲ್ಲಿ ತಪ್ಪಿದ್ದಲ್ಲಿ ತಿಳಿಸಿ.ಒಂದು ಅಕ್ಕರದ ಕೆಳಗೆ ಇನ್ನೊಂದು ಅಕ್ಕರ ಇರುವ ಪದಗಳೆಲ್ಲವೂ ಹೊರಗಿನವೇ ಆಗಿವೆ. ಉದಾ: ಪತ್ರ, ಚಿತ್ರ, ಪಾತ್ರ, ವಿನಮ್ರ, ವಿಕ್ರಮ, ವಿಕ್ರಯ, ಹೀಗೆ ಬಹಳ ಪದಗಳು. ಈ ಪದಗಳು ಕನ್ನಡಿಗರಿಗೆ ಹೊಂದಿಲ್ಲ. ಟಪಾಲು, ಕಾಗದ(ಕಾಗಜ್ ನಿಂದ ಬಂದದ್ದು), ಇಂತವು ಹೊರಗಿನವಾದರೂ ಒತ್ತಕ್ಕರದ ಕಟ್ಟಳೆ ಕಾಪಾಡುವದರಿಂದ ಅವು ಬಲು ಬೇಗ ಕನ್ನಡದ ಪದಗಳಾಗಿವೆ.
......
ಹೀಗೆ, ಒಂದು ಅಕ್ಕರದಡಿ ಇನ್ನೊಂದು ಅಕ್ಕರ ಬರುವ ಯಾವುದೇ ಪದ ತೆಗೆದುಕೊಳ್ಳಿ, ಅದನ್ನವರು ನಿಯಮಾನುಸಾರ ತಿದ್ದಿಯೇ ಆಡುತ್ತಾರೆ. ಉದಾ; ಬರಹದಲ್ಲಿ ಬಹಳ ಸಾಮಾನಿಯಾಗಿ(ಸಾಮಾ 'ನ್ಯ' ವಾಗಿ) ಬಳಸುವ 'ಪ್ರಾಣ' ತೆಗೆದುಕೊಳ್ಳಿ, ಅದನ್ನವರು 'ಪಿರಾಣ', ಇಲ್ಲವೇ 'ಪರಾಣ' ಎನ್ನುತ್ತಾರೆ. 'ರಾತ್ರಿ' ಎಂಬುದನ್ನು 'ರಾತರಿ' ಎನ್ನುತ್ತಾರೆ. 'ಚಿತ್ರ' - ಚಿತ್ತಾರ. 'ಸ್ವಚ್ಛ' - ಸೊಚ್ಚ. ಸ್ವಲ್ಪ - ಸೊಲುಪ.
........
'ವ' ದ ಒಗಟುಕನ್ನಡದಲ್ಲಿ 'ವ' ದಿಂದ ಸುರುವಾಗುವ ಪದಗಳಿಲ್ಲ. 'ವ' ದಿಂದ ಸುರುವಾಗುವ ಪದಗಳೆಲ್ಲವೂ ಹೊರಗಿನವೇ.ವಿಮಾನ - ಇಮಾನ, ವಿಚಾರ - ಇಚಾರ, ವ್ಯವಸಾಯ - ಬೇಸಾಯ, ವ್ಯಂಜನ - ಬೆಂಜನ, ವ್ಯಾಕರಣ - ಬೇಗರಣವೆಂಕ - ಯಂಕ, ವೇದಿಕೆ - ಯೇದಿಕೆ, ವಿನಯ - ಇನಯಬರವಣಿಗೆಯಲ್ಲಿ 'ವ' ನ್ನು ಬೇರೆ ಅಕ್ಕರದೊಂದಿಗೆ ಬರೆದರೂ ಮಾತನಾಡುವಾಗ ಹೆಚ್ಚಿನ ಬಾರಿ, 'ಒ' ಆಗುವುದು.ಸ್ವಚ್ಚ - ಸೊಚ್ಚ, ಸ್ವಂತ - ಸೊಂತ, ಸ್ವಲ್ಪ - ಸೊಲುಪ, ಬಹುಸ ಈ ಪದಗಳನ್ನು ಮೊದಲು ಹೀಗೆಯೇ ಬರೆಯುತ್ತಿದ್ದರೇನೋ. ಸಕ್ಕದದ ಬೆನ್ನು ಬಿದ್ದ ಬರಹಗಾರರು, "ಒತ್ತಕ್ಕರದ ಕಟ್ಟಳೆ" ಯನ್ನು ಗಾಳಿಗೆ ತೂರಿದ್ದರಿಂದ ಅವು ಬದಲಾಗಿವೆ.ಸೊಕ್ಕು,ಸೊನ್ನೆ,ಸೊಲ್ಲು,ಸೊಪ್ಪು,ಸೊಂಡಿಲು,ಸೊಗಸು,ಸೊಗಡು ಈ ಪದಗಳಂತೆಯೇ ಮೇಲೆ ಮಾದರಿಸಿದ ಪದಗಳನ್ನು ಬರೆಯಬೇಕು.ಯಾವುದೇ ಕನ್ನಡ ಬರಹವನ್ನು ಓದುವಾಗ ನಡುವೆ ಬರುವ ಸಕ್ಕದದ, ಇಲ್ಲವೇ ಬೇರೆ ಯಾವುದೇ ನುಡಿಯ, ಹೆಚ್ಚಿನ ಪದಗಳು ಒತ್ತಕ್ಕರದ ಕಟ್ಟಳೆ ಯನ್ನು ಮೀರುವ ಇಲ್ಲವೇ ವ ದಿಂದ ಸುರುವಾಗುವ ಪದಗಳೇ ಆಗಿವೆ.
.......
ಮೈಸೂರು ಮಲ್ಲಿಗೆ : ಏಕೆ ಮೈಸೂರು ಮಲ್ಲಿಗೆ, ಎಲ್ಲರಿಗೂ ಹಿಡಿಸುವುದು? ಬರೆದು ಏಸು ಕಾಲವಾಗಿದ್ದರೂ ಅದರಲ್ಲಿ ಬರುವ ಹಾಡುಗಳು, ಎಲ್ಲರಿಗೂ ಮನಸ್ಸಿಗೆ ಮುದ ನೀಡುವವು.
ಬಳೆಗಾರ ಚೆನ್ನಯ್ಯನ ಹಾಡು
(
ಬಳೆಗಾರ ಚೆನ್ನಯ್ಯ ಬಾಗಿಲಿಗೆ ಬಂದಿಹೆನು ಒಳಗೆ ಬರಲಪ್ಪಣೆಯೆ ದೊರೆಯೆ?
ನವಿಲೂರ ಮನೆಯಿಂದ ನುಡಿಯೊಂದ ತಂದಿಹೆನು, ಬಳೆಯ ತೊಡಿಸುವುದಿಲ್ಲ ನಿಮಗೆ.
ಮುಡಿದ ಮಲ್ಲಿಗೆ ಅರಳು ಬಾಡಿಲ್ಲ ರಾಯರೇ, ತವರಿನಲಿ ತಾಯಿ ನಗುತಿಹರು
ಕುಡಿದ ನೀರಲುಗಿಲ್ಲ ಕೊರಗಿದರಿ ರಾಯರೇ, ಅವ್ವನಿಗೆ ಬಳೆಯ ತೊಡಿಸಿದರು
ಅಂದು ಮಂಗಳವಾರ ನವಿಲೂರ ಕೇರಿಯಲಿ, ಓಲಗದು ಸದ್ದು ತುಂಬಿತ್ತು
ಬಳೆಯ ತೊಡಿಸಿದರಂದು ಅವ್ವನಿಗೆ ತೌರಿನಲಿ, ಅಂಗಳದ ತುಂಬ ಜನವಿತ್ತು
ಸಿರಿಗೌರಿಯಂತೆ ಬಂದರು ತಾಯಿ, ಸೆರಗಿನಲಿ ಕಣ್ಣೀರನೊರಸಿ
ಸುಕದೊಳಗೆ ನಿಮ್ಮ ನೆನೆದರು ತಾಯಿ ಗುಣವಂತೆ, ದೀಪದಲಿ ಬಿಡುಗಣ್ಣ ನಿಲಿಸಿ
ಬೇಕಾದ ಹಣ್ಣಿಹುದು ಹೂ ಇಹುದು ತೌರಿನಲಿ, ಹೊಸ ಸೀರೆ ರತುನದಾಬರಣ
ತಾಯಿ ಕೊರಗುವರಲ್ಲಿ ನೀವಿಲ್ಲದೂರಿನಲಿ, ನಿಮಗಿಲ್ಲ ಒಂದು ಹಣಿ ಕರುಣ
ದಿನವಾದ ಬಸುರಿ ಉಸ್ಸೆಂದು ನಿಟ್ಟುಸಿರಿಟ್ಟು ಕುದಿಯಬಾರದು ನನ್ನ ದೊರೆಯೆ
ಹಿಂಡ ಬಾರದು ದುಂಡು ಮಲ್ಲಿಗೆಯೆ ದಂಡೆಯನು, ಒಣಗಬಾರದು ಒಡಲ ಚಿಲುಮೆ
ಮುನಿಸು ಮಾವನ ಮೇಲೆ, ಮಗಳೇನ ಮಾಡಿದಳು, ನಿಮಗೇತಕೀ ಕಲ್ಲು ಮನಸು?
ಹೋಗಿ ಬನ್ನಿರಿ ಒಮ್ಮೆ, ಕೈ ಮುಗಿದು ಬೇಡುವೆನು, ಅವ್ವನಿಗೆ ನಿಮ್ಮದೇ ಕನಸು
ಬಳೆಗಾರ ಚೆನ್ನಯ್ಯ ....
)
ಏನು ಸೊಗಸಾಗಿದೆ!. ಇದನ್ನು ಗಮನಿಸಿದಾಗ, ಇದರಲ್ಲಿ ಸಕ್ಕದದ ಪದಗಳ ಬಳಕೆಯಾಗಲಿ, ಮಹಾಪ್ರಾಣಗಳ ಬಳಕೆಯಾಗಲಿ ಇಲ್ಲವೇ ಇಲ್ಲ, ಇದ್ದರೂ ಅವು ಕನ್ನಡದ ನೇಮಗಳನ್ನು ಪಾಲಿಸುತ್ತವೆ. ಏಕೆಂದರೆ "ಬೆರಕೆ ಪದಗಳು" (ಒಂದು ಅಕ್ಕರದ ಕೆಳಗೆ ಇನ್ನೊಂದು ಅಕ್ಕರ) ಕನ್ನಡ ಹಾಡುಗಳಲ್ಲಿ ಹೊಂದುವದಿಲ್ಲ, ಮಾತನಾಡುವದರಲ್ಲೂ ಹೊಂದುವದಿಲ್ಲ.
------------------
ಕೆಲವನ್ನು ಒಪ್ಪಲಾಗದು ( ಮಹಾಪ್ರಾಣಗಳ ಕೈಬಿಡುವಿಕೆ, ವ್ಯಾಕರಣವನ್ನು ಬೇಗರಣ/ ವ್ಯಂಜನವನ್ನು ಬೆಂಜನ ಎನ್ನುವದು)
ಒಪ್ಪುವ ವಿಚಾರ.
ಒತ್ತಕ್ಕರ ಕಟ್ಟಳೆ :- ಒತ್ತು+ಅಕ್ಕರ ( ಒತ್ತು ಅಕ್ಷರ ). ಅಂದರೆ ಕನ್ನಡದಲ್ಲಿ ಒಂದು ಅಕ್ಕರವನ್ನು ಒತ್ತಿ ಹೇಳುವದನ್ನು, ಬರೆಯುವಾಗ, ಆ ಅಕ್ಕರದ ಕೆಳಗೆ ಅದೇ ಅಕ್ಕರವನ್ನು ಬರೆಯಲಾಗುತ್ತದೆ.ಉದಾ: ಕಲ್ಲು, ಮುಳ್ಳು, ಸುಳ್ಳು, ಅಕ್ಕರೆ, ಸಕ್ಕರೆ, ಅಗ್ಗ, ಹಿಗ್ಗು, ಸುಗ್ಗಿ, ನುಗ್ಗು, ಪಕ್ಕ, ಚುಕ್ಕ ಹೀಗೆ ಹಲವಾರು.ಪೊಳ್ಳು, ಗೊಳ್ಳು, ಗೊಡ್ಡು, ಮುತ್ತು, ಸುತ್ತು, ತುತ್ತು, ಕತ್ತು, ಕುತ್ತು, ಸೊತ್ತು. ಬಹಳ ಇವೆ.ಕಟ್ಟಳೆಯ ಉಲ್ಲಂಗನೆ :- ಒತ್ತಕ್ಕರ ಎಂಬ ಪದದಲ್ಲಿಯೇ 'ಒತ್ತು' ಇದೆ. ಅಂದರೆ ಆ ಅಕ್ಕರವನ್ನು ಒತ್ತಿ ಹೇಳುವುದು. ಒಂದು ಅಕ್ಕರದ ಕೆಳಗೆ ಇನ್ನೊಂದು ಅಕ್ಕರವನ್ನು ಬರೆದರೆ(ಉದಾ: ಪ್ರ), ಅದು ಬೆರಕೆಯಾಗುತ್ತದೆ, ಒತ್ತಕ್ಕರ ಹೇಗಾಗುತ್ತದೆ? ಇದರಲ್ಲಿ ತಪ್ಪಿದ್ದಲ್ಲಿ ತಿಳಿಸಿ.ಒಂದು ಅಕ್ಕರದ ಕೆಳಗೆ ಇನ್ನೊಂದು ಅಕ್ಕರ ಇರುವ ಪದಗಳೆಲ್ಲವೂ ಹೊರಗಿನವೇ ಆಗಿವೆ. ಉದಾ: ಪತ್ರ, ಚಿತ್ರ, ಪಾತ್ರ, ವಿನಮ್ರ, ವಿಕ್ರಮ, ವಿಕ್ರಯ, ಹೀಗೆ ಬಹಳ ಪದಗಳು. ಈ ಪದಗಳು ಕನ್ನಡಿಗರಿಗೆ ಹೊಂದಿಲ್ಲ. ಟಪಾಲು, ಕಾಗದ(ಕಾಗಜ್ ನಿಂದ ಬಂದದ್ದು), ಇಂತವು ಹೊರಗಿನವಾದರೂ ಒತ್ತಕ್ಕರದ ಕಟ್ಟಳೆ ಕಾಪಾಡುವದರಿಂದ ಅವು ಬಲು ಬೇಗ ಕನ್ನಡದ ಪದಗಳಾಗಿವೆ.
......
ಹೀಗೆ, ಒಂದು ಅಕ್ಕರದಡಿ ಇನ್ನೊಂದು ಅಕ್ಕರ ಬರುವ ಯಾವುದೇ ಪದ ತೆಗೆದುಕೊಳ್ಳಿ, ಅದನ್ನವರು ನಿಯಮಾನುಸಾರ ತಿದ್ದಿಯೇ ಆಡುತ್ತಾರೆ. ಉದಾ; ಬರಹದಲ್ಲಿ ಬಹಳ ಸಾಮಾನಿಯಾಗಿ(ಸಾಮಾ 'ನ್ಯ' ವಾಗಿ) ಬಳಸುವ 'ಪ್ರಾಣ' ತೆಗೆದುಕೊಳ್ಳಿ, ಅದನ್ನವರು 'ಪಿರಾಣ', ಇಲ್ಲವೇ 'ಪರಾಣ' ಎನ್ನುತ್ತಾರೆ. 'ರಾತ್ರಿ' ಎಂಬುದನ್ನು 'ರಾತರಿ' ಎನ್ನುತ್ತಾರೆ. 'ಚಿತ್ರ' - ಚಿತ್ತಾರ. 'ಸ್ವಚ್ಛ' - ಸೊಚ್ಚ. ಸ್ವಲ್ಪ - ಸೊಲುಪ.
........
'ವ' ದ ಒಗಟುಕನ್ನಡದಲ್ಲಿ 'ವ' ದಿಂದ ಸುರುವಾಗುವ ಪದಗಳಿಲ್ಲ. 'ವ' ದಿಂದ ಸುರುವಾಗುವ ಪದಗಳೆಲ್ಲವೂ ಹೊರಗಿನವೇ.ವಿಮಾನ - ಇಮಾನ, ವಿಚಾರ - ಇಚಾರ, ವ್ಯವಸಾಯ - ಬೇಸಾಯ, ವ್ಯಂಜನ - ಬೆಂಜನ, ವ್ಯಾಕರಣ - ಬೇಗರಣವೆಂಕ - ಯಂಕ, ವೇದಿಕೆ - ಯೇದಿಕೆ, ವಿನಯ - ಇನಯಬರವಣಿಗೆಯಲ್ಲಿ 'ವ' ನ್ನು ಬೇರೆ ಅಕ್ಕರದೊಂದಿಗೆ ಬರೆದರೂ ಮಾತನಾಡುವಾಗ ಹೆಚ್ಚಿನ ಬಾರಿ, 'ಒ' ಆಗುವುದು.ಸ್ವಚ್ಚ - ಸೊಚ್ಚ, ಸ್ವಂತ - ಸೊಂತ, ಸ್ವಲ್ಪ - ಸೊಲುಪ, ಬಹುಸ ಈ ಪದಗಳನ್ನು ಮೊದಲು ಹೀಗೆಯೇ ಬರೆಯುತ್ತಿದ್ದರೇನೋ. ಸಕ್ಕದದ ಬೆನ್ನು ಬಿದ್ದ ಬರಹಗಾರರು, "ಒತ್ತಕ್ಕರದ ಕಟ್ಟಳೆ" ಯನ್ನು ಗಾಳಿಗೆ ತೂರಿದ್ದರಿಂದ ಅವು ಬದಲಾಗಿವೆ.ಸೊಕ್ಕು,ಸೊನ್ನೆ,ಸೊಲ್ಲು,ಸೊಪ್ಪು,ಸೊಂಡಿಲು,ಸೊಗಸು,ಸೊಗಡು ಈ ಪದಗಳಂತೆಯೇ ಮೇಲೆ ಮಾದರಿಸಿದ ಪದಗಳನ್ನು ಬರೆಯಬೇಕು.ಯಾವುದೇ ಕನ್ನಡ ಬರಹವನ್ನು ಓದುವಾಗ ನಡುವೆ ಬರುವ ಸಕ್ಕದದ, ಇಲ್ಲವೇ ಬೇರೆ ಯಾವುದೇ ನುಡಿಯ, ಹೆಚ್ಚಿನ ಪದಗಳು ಒತ್ತಕ್ಕರದ ಕಟ್ಟಳೆ ಯನ್ನು ಮೀರುವ ಇಲ್ಲವೇ ವ ದಿಂದ ಸುರುವಾಗುವ ಪದಗಳೇ ಆಗಿವೆ.
.......
ಮೈಸೂರು ಮಲ್ಲಿಗೆ : ಏಕೆ ಮೈಸೂರು ಮಲ್ಲಿಗೆ, ಎಲ್ಲರಿಗೂ ಹಿಡಿಸುವುದು? ಬರೆದು ಏಸು ಕಾಲವಾಗಿದ್ದರೂ ಅದರಲ್ಲಿ ಬರುವ ಹಾಡುಗಳು, ಎಲ್ಲರಿಗೂ ಮನಸ್ಸಿಗೆ ಮುದ ನೀಡುವವು.
ಬಳೆಗಾರ ಚೆನ್ನಯ್ಯನ ಹಾಡು
(
ಬಳೆಗಾರ ಚೆನ್ನಯ್ಯ ಬಾಗಿಲಿಗೆ ಬಂದಿಹೆನು ಒಳಗೆ ಬರಲಪ್ಪಣೆಯೆ ದೊರೆಯೆ?
ನವಿಲೂರ ಮನೆಯಿಂದ ನುಡಿಯೊಂದ ತಂದಿಹೆನು, ಬಳೆಯ ತೊಡಿಸುವುದಿಲ್ಲ ನಿಮಗೆ.
ಮುಡಿದ ಮಲ್ಲಿಗೆ ಅರಳು ಬಾಡಿಲ್ಲ ರಾಯರೇ, ತವರಿನಲಿ ತಾಯಿ ನಗುತಿಹರು
ಕುಡಿದ ನೀರಲುಗಿಲ್ಲ ಕೊರಗಿದರಿ ರಾಯರೇ, ಅವ್ವನಿಗೆ ಬಳೆಯ ತೊಡಿಸಿದರು
ಅಂದು ಮಂಗಳವಾರ ನವಿಲೂರ ಕೇರಿಯಲಿ, ಓಲಗದು ಸದ್ದು ತುಂಬಿತ್ತು
ಬಳೆಯ ತೊಡಿಸಿದರಂದು ಅವ್ವನಿಗೆ ತೌರಿನಲಿ, ಅಂಗಳದ ತುಂಬ ಜನವಿತ್ತು
ಸಿರಿಗೌರಿಯಂತೆ ಬಂದರು ತಾಯಿ, ಸೆರಗಿನಲಿ ಕಣ್ಣೀರನೊರಸಿ
ಸುಕದೊಳಗೆ ನಿಮ್ಮ ನೆನೆದರು ತಾಯಿ ಗುಣವಂತೆ, ದೀಪದಲಿ ಬಿಡುಗಣ್ಣ ನಿಲಿಸಿ
ಬೇಕಾದ ಹಣ್ಣಿಹುದು ಹೂ ಇಹುದು ತೌರಿನಲಿ, ಹೊಸ ಸೀರೆ ರತುನದಾಬರಣ
ತಾಯಿ ಕೊರಗುವರಲ್ಲಿ ನೀವಿಲ್ಲದೂರಿನಲಿ, ನಿಮಗಿಲ್ಲ ಒಂದು ಹಣಿ ಕರುಣ
ದಿನವಾದ ಬಸುರಿ ಉಸ್ಸೆಂದು ನಿಟ್ಟುಸಿರಿಟ್ಟು ಕುದಿಯಬಾರದು ನನ್ನ ದೊರೆಯೆ
ಹಿಂಡ ಬಾರದು ದುಂಡು ಮಲ್ಲಿಗೆಯೆ ದಂಡೆಯನು, ಒಣಗಬಾರದು ಒಡಲ ಚಿಲುಮೆ
ಮುನಿಸು ಮಾವನ ಮೇಲೆ, ಮಗಳೇನ ಮಾಡಿದಳು, ನಿಮಗೇತಕೀ ಕಲ್ಲು ಮನಸು?
ಹೋಗಿ ಬನ್ನಿರಿ ಒಮ್ಮೆ, ಕೈ ಮುಗಿದು ಬೇಡುವೆನು, ಅವ್ವನಿಗೆ ನಿಮ್ಮದೇ ಕನಸು
ಬಳೆಗಾರ ಚೆನ್ನಯ್ಯ ....
)
ಏನು ಸೊಗಸಾಗಿದೆ!. ಇದನ್ನು ಗಮನಿಸಿದಾಗ, ಇದರಲ್ಲಿ ಸಕ್ಕದದ ಪದಗಳ ಬಳಕೆಯಾಗಲಿ, ಮಹಾಪ್ರಾಣಗಳ ಬಳಕೆಯಾಗಲಿ ಇಲ್ಲವೇ ಇಲ್ಲ, ಇದ್ದರೂ ಅವು ಕನ್ನಡದ ನೇಮಗಳನ್ನು ಪಾಲಿಸುತ್ತವೆ. ಏಕೆಂದರೆ "ಬೆರಕೆ ಪದಗಳು" (ಒಂದು ಅಕ್ಕರದ ಕೆಳಗೆ ಇನ್ನೊಂದು ಅಕ್ಕರ) ಕನ್ನಡ ಹಾಡುಗಳಲ್ಲಿ ಹೊಂದುವದಿಲ್ಲ, ಮಾತನಾಡುವದರಲ್ಲೂ ಹೊಂದುವದಿಲ್ಲ.
------------------
Sunday, August 13, 2006
innaShtu
ಸತ್ತಂತಿಹರನು ಬಡಿದೆಚ್ಚರಿಸು!ಕಚ್ಚಾಡುವರನು ಕೂಡಿಸಿ ಒಲಿಸು!ಹೊಟ್ಟೆಕಿಚ್ಚಿಗೆ ತಣ್ಣೀರ್ ಹರಿಸು!ಒಟ್ಟಿಗೆ ಬಾಳುವ ತೆರದಲಿ ಹರಸು!
ಇದು ಕನ್ನಡ.
'ಸತ್ತಂತಿಹರನು', ('ಮರಣ ಹೊಂದಿದವರನು' ಅಲ್ಲ)
'ಬಡಿದೆಚ್ಚರಿಸು', ('ದಂಡಿಸಿ ಎಚ್ಚರಿಸು' ಅಲ್ಲ)
'ಕಚ್ಚಾಡುವರನು', ('ದ್ವೇಷಿಸುವರನು' ಅಲ್ಲ)
'ಕೂಡಿಸಿ', ('ಏಕೀಕರಣಗೊಳಿಸಿ' ಅಲ್ಲ)
'ಒಲಿಸು', ('ಇಷ್ಟ'ಪಡಿಸು ಅಲ್ಲ)
'ಹೊಟ್ಟೆಕಿಚ್ಚು', ('ವೈಷಮ್ಯ' ಅಲ್ಲ)
'ತನ್ನೀರು', ('ಶೀತಲ ಜಲ' ಅಲ್ಲ)
'ಎರಚು', ('ಪ್ರೋಕ್ಷಿಸು' ಅಲ್ಲ)
'ಒಟ್ಟಿಗೆ', ('ಏಕತೆಯಿಂದ' ಅಲ್ಲ)
'ಬಾಳು', ('ಜೀವಿಸು' ಅಲ್ಲ)
'ತೆರದಲಿ', ('ರೀತಿಯಲ್ಲಿ' ಅಲ್ಲ)
'ಹರಸು', ('ಅನುಗ್ರಹಿಸು' ಅಲ್ಲ)
ಇದು ಕನ್ನಡ.
'ಸತ್ತಂತಿಹರನು', ('ಮರಣ ಹೊಂದಿದವರನು' ಅಲ್ಲ)
'ಬಡಿದೆಚ್ಚರಿಸು', ('ದಂಡಿಸಿ ಎಚ್ಚರಿಸು' ಅಲ್ಲ)
'ಕಚ್ಚಾಡುವರನು', ('ದ್ವೇಷಿಸುವರನು' ಅಲ್ಲ)
'ಕೂಡಿಸಿ', ('ಏಕೀಕರಣಗೊಳಿಸಿ' ಅಲ್ಲ)
'ಒಲಿಸು', ('ಇಷ್ಟ'ಪಡಿಸು ಅಲ್ಲ)
'ಹೊಟ್ಟೆಕಿಚ್ಚು', ('ವೈಷಮ್ಯ' ಅಲ್ಲ)
'ತನ್ನೀರು', ('ಶೀತಲ ಜಲ' ಅಲ್ಲ)
'ಎರಚು', ('ಪ್ರೋಕ್ಷಿಸು' ಅಲ್ಲ)
'ಒಟ್ಟಿಗೆ', ('ಏಕತೆಯಿಂದ' ಅಲ್ಲ)
'ಬಾಳು', ('ಜೀವಿಸು' ಅಲ್ಲ)
'ತೆರದಲಿ', ('ರೀತಿಯಲ್ಲಿ' ಅಲ್ಲ)
'ಹರಸು', ('ಅನುಗ್ರಹಿಸು' ಅಲ್ಲ)
Friday, August 11, 2006
ಮತ್ತಷ್ಟು
ಭರಾಟೆ = ಅಬ್ಬರ.
ವರ್ಷಧಾರೆ = ಮಳೆ ಸುರಿತ.
ಮಾಜಿ = ಹಿಂದಿನ
ಹಾಲಿ = ಈಗಿನ
ವರ್ಷಧಾರೆ = ಮಳೆ ಸುರಿತ.
ಮಾಜಿ = ಹಿಂದಿನ
ಹಾಲಿ = ಈಗಿನ
ಸಂಸ್ಕೃತಶಬ್ದಗಳ ಬದಲಾಗಿ
ಪರಿಣಿತರು = ಪಳಗಿದವರು, ಬಲ್ಲವರು, ಅರಿತವರು, ತಿಳಿದವರು, ಗೊತ್ತಿರುವವರು.
ಬಲ್ಲಿದ ? ( ಶ್ರೀಮಂತ ಎಂದಾಗುವದೇ? -'ಬಡವಬಲ್ಲಿದ' ದಂತೆ
ದೇಹ = ಮೈ
ತೀರ = ದಡ, ಅಂಚು, ದಂಡೆ
ಶಿಖರ - ತುದಿ , ತುತ್ತತುದಿ
ಪ್ರಯಾಣ - ಪಯಣ
ಓರ್ವ = ಒಬ್ಬ,
ಮೂರ್ಖ = ಮುಕ್ಕ,
ವರ್ಷ = ವರುಸ,
ಹರ್ಷ = ಹರುಸ,
ಭಕ್ತ = ಬಕುತ
ಬಿಳಿಯನ್ನ/ಬರಿಯನ್ನ = ಪ್ಲೈನ್ ರಾಸೈ
ಪಲ್ಯ/ಗೊಜ್ಜು = ಕರ್ರಿ.
ಮಜ್ಜಿಗೆ = ಬಟ್ಟರ ಮಿಲ್ಕು
ಮೊಸರು = ಕರ್ಡುಸು
ಮೊಸರನ್ನ = ಕರಡು ರೈಸು
ಹುಳಿತೊವ್ವೆ = ಸಾಂಬಾರು ( ಸಾಂಬಾರು, ಹುಳಿ ತೊವ್ವೆ, ಕೂಟು ಎಲ್ಲ ಸಾಂಬಾರೆ)
ತೊವ್ವೆ = ದಾಲ್
ಪುಳಿಯೊಗರೆ = ಪುಳಿಯೋಗರ(MTR ad ನೋಡಿ)
ಬೆಂಗಳೂರಿನ ಹೋಟೆಲುಗಳಲ್ಲಿ ಯಾರಿಗೆ ಕೂಡ "ಮಾವಿನ ಪಾನಕ", "ಉಪ್ಪಿಟ್ಟು", "ಕಿತ್ತಳೆ ಪಾನಕ", "ಮೊಸರನ್ನ" ಗೊತ್ತೇ ಇಲ್ಲ. ಅವರ ಕನ್ನಡದಲ್ಲಿ ಅದೇನಿದ್ದರು "ಮ್ಯಾಂಗೋ ಜ್ಯೂಸ್", "ಕಾರ ಬಾತ್", "ಆರೇಂಜ್ ಜ್ಯೂಸ್", "ಕರಡು ರೈಸು".
ತಿಳಿ ( ನಾಮಪದ ಮತ್ತು ಕ್ರಿಯಾಪದ) , ತಿಳುವಳಿಕೆ , ತಿಳಿಸು
ಹೃದಯ - ಎದೆ , ಗುಂಡಿಗೆ
ಬಲ್ಲಿದ ? ( ಶ್ರೀಮಂತ ಎಂದಾಗುವದೇ? -'ಬಡವಬಲ್ಲಿದ' ದಂತೆ
ದೇಹ = ಮೈ
ತೀರ = ದಡ, ಅಂಚು, ದಂಡೆ
ಶಿಖರ - ತುದಿ , ತುತ್ತತುದಿ
ಪ್ರಯಾಣ - ಪಯಣ
ಓರ್ವ = ಒಬ್ಬ,
ಮೂರ್ಖ = ಮುಕ್ಕ,
ವರ್ಷ = ವರುಸ,
ಹರ್ಷ = ಹರುಸ,
ಭಕ್ತ = ಬಕುತ
ಬಿಳಿಯನ್ನ/ಬರಿಯನ್ನ = ಪ್ಲೈನ್ ರಾಸೈ
ಪಲ್ಯ/ಗೊಜ್ಜು = ಕರ್ರಿ.
ಮಜ್ಜಿಗೆ = ಬಟ್ಟರ ಮಿಲ್ಕು
ಮೊಸರು = ಕರ್ಡುಸು
ಮೊಸರನ್ನ = ಕರಡು ರೈಸು
ಹುಳಿತೊವ್ವೆ = ಸಾಂಬಾರು ( ಸಾಂಬಾರು, ಹುಳಿ ತೊವ್ವೆ, ಕೂಟು ಎಲ್ಲ ಸಾಂಬಾರೆ)
ತೊವ್ವೆ = ದಾಲ್
ಪುಳಿಯೊಗರೆ = ಪುಳಿಯೋಗರ(MTR ad ನೋಡಿ)
ಬೆಂಗಳೂರಿನ ಹೋಟೆಲುಗಳಲ್ಲಿ ಯಾರಿಗೆ ಕೂಡ "ಮಾವಿನ ಪಾನಕ", "ಉಪ್ಪಿಟ್ಟು", "ಕಿತ್ತಳೆ ಪಾನಕ", "ಮೊಸರನ್ನ" ಗೊತ್ತೇ ಇಲ್ಲ. ಅವರ ಕನ್ನಡದಲ್ಲಿ ಅದೇನಿದ್ದರು "ಮ್ಯಾಂಗೋ ಜ್ಯೂಸ್", "ಕಾರ ಬಾತ್", "ಆರೇಂಜ್ ಜ್ಯೂಸ್", "ಕರಡು ರೈಸು".
ತಿಳಿ ( ನಾಮಪದ ಮತ್ತು ಕ್ರಿಯಾಪದ) , ತಿಳುವಳಿಕೆ , ತಿಳಿಸು
ಹೃದಯ - ಎದೆ , ಗುಂಡಿಗೆ
ಬ್ಲಾಗಿನ ಪರಿಚಯ :
ಈ ಬ್ಲಾಗ್ ಶಬ್ದ ಮತ್ತು ಅರ್ಥಗಳ ಕುರಿತಾಗಿದೆ .
ಈ ಬ್ಲಾಗಿನಲ್ಲಿ ನಾನು ಕಂಡುಕೊಂಡ ಹೊಸ/ಹಳೆ ಶಬ್ದಗಳು / ಅರ್ಥಗಳು ಇತ್ಯಾದಿಗಳನ್ನು ಕೊಡುವ ಆಸೆ ಇದೆ .
ಈ ಬ್ಲಾಗಿನಲ್ಲಿ ನಾನು ಕಂಡುಕೊಂಡ ಹೊಸ/ಹಳೆ ಶಬ್ದಗಳು / ಅರ್ಥಗಳು ಇತ್ಯಾದಿಗಳನ್ನು ಕೊಡುವ ಆಸೆ ಇದೆ .