Sunday, August 13, 2006

 

innaShtu

ಸತ್ತಂತಿಹರನು ಬಡಿದೆಚ್ಚರಿಸು!ಕಚ್ಚಾಡುವರನು ಕೂಡಿಸಿ ಒಲಿಸು!ಹೊಟ್ಟೆಕಿಚ್ಚಿಗೆ ತಣ್ಣೀರ್ ಹರಿಸು!ಒಟ್ಟಿಗೆ ಬಾಳುವ ತೆರದಲಿ ಹರಸು!
ಇದು ಕನ್ನಡ.
'ಸತ್ತಂತಿಹರನು', ('ಮರಣ ಹೊಂದಿದವರನು' ಅಲ್ಲ)
'ಬಡಿದೆಚ್ಚರಿಸು', ('ದಂಡಿಸಿ ಎಚ್ಚರಿಸು' ಅಲ್ಲ)
'ಕಚ್ಚಾಡುವರನು', ('ದ್ವೇಷಿಸುವರನು' ಅಲ್ಲ)
'ಕೂಡಿಸಿ', ('ಏಕೀಕರಣಗೊಳಿಸಿ' ಅಲ್ಲ)
'ಒಲಿಸು', ('ಇಷ್ಟ'ಪಡಿಸು ಅಲ್ಲ)
'ಹೊಟ್ಟೆಕಿಚ್ಚು', ('ವೈಷಮ್ಯ' ಅಲ್ಲ)
'ತನ್ನೀರು', ('ಶೀತಲ ಜಲ' ಅಲ್ಲ)
'ಎರಚು', ('ಪ್ರೋಕ್ಷಿಸು' ಅಲ್ಲ)
'ಒಟ್ಟಿಗೆ', ('ಏಕತೆಯಿಂದ' ಅಲ್ಲ)
'ಬಾಳು', ('ಜೀವಿಸು' ಅಲ್ಲ)
'ತೆರದಲಿ', ('ರೀತಿಯಲ್ಲಿ' ಅಲ್ಲ)
'ಹರಸು', ('ಅನುಗ್ರಹಿಸು' ಅಲ್ಲ)

Friday, August 11, 2006

 

ಮತ್ತಷ್ಟು

ಭರಾಟೆ = ಅಬ್ಬರ.
ವರ್ಷಧಾರೆ = ಮಳೆ ಸುರಿತ.
ಮಾಜಿ = ಹಿಂದಿನ
ಹಾಲಿ = ಈಗಿನ

 

ಸಂಸ್ಕೃತಶಬ್ದಗಳ ಬದಲಾಗಿ

ಪರಿಣಿತರು = ಪಳಗಿದವರು, ಬಲ್ಲವರು, ಅರಿತವರು, ತಿಳಿದವರು, ಗೊತ್ತಿರುವವರು.
ಬಲ್ಲಿದ ? ( ಶ್ರೀಮಂತ ಎಂದಾಗುವದೇ? -'ಬಡವಬಲ್ಲಿದ' ದಂತೆ
ದೇಹ = ಮೈ
ತೀರ = ದಡ, ಅಂಚು, ದಂಡೆ
ಶಿಖರ - ತುದಿ , ತುತ್ತತುದಿ
ಪ್ರಯಾಣ - ಪಯಣ
ಓರ್ವ = ಒಬ್ಬ,
ಮೂರ್ಖ = ಮುಕ್ಕ,
ವರ್ಷ = ವರುಸ,
ಹರ್ಷ = ಹರುಸ,
ಭಕ್ತ = ಬಕುತ

ಬಿಳಿಯನ್ನ/ಬರಿಯನ್ನ = ಪ್ಲೈನ್ ರಾಸೈ
ಪಲ್ಯ/ಗೊಜ್ಜು = ಕರ್ರಿ‍.
ಮಜ್ಜಿಗೆ = ಬಟ್ಟರ ಮಿಲ್ಕು
ಮೊಸರು = ಕರ್ಡುಸು
ಮೊಸರನ್ನ = ಕರಡು ರೈಸು
ಹುಳಿತೊವ್ವೆ = ಸಾಂಬಾರು ( ಸಾಂಬಾರು, ಹುಳಿ ತೊವ್ವೆ, ಕೂಟು ಎಲ್ಲ ಸಾಂಬಾರೆ)
ತೊವ್ವೆ = ದಾಲ್
ಪುಳಿಯೊಗರೆ = ಪುಳಿಯೋಗರ(MTR ad ನೋಡಿ)
ಬೆಂಗಳೂರಿನ ಹೋಟೆಲುಗಳಲ್ಲಿ ಯಾರಿಗೆ ಕೂಡ "ಮಾವಿನ ಪಾನಕ", "ಉಪ್ಪಿಟ್ಟು", "ಕಿತ್ತಳೆ ಪಾನಕ", "ಮೊಸರನ್ನ" ಗೊತ್ತೇ ಇಲ್ಲ. ಅವರ ಕನ್ನಡದಲ್ಲಿ ಅದೇನಿದ್ದರು "ಮ್ಯಾಂಗೋ ಜ್ಯೂಸ್", "ಕಾರ ಬಾತ್", "ಆರೇಂಜ್ ಜ್ಯೂಸ್", "ಕರಡು ರೈಸು".


ತಿಳಿ ( ನಾಮಪದ ಮತ್ತು ಕ್ರಿಯಾಪದ) , ತಿಳುವಳಿಕೆ , ತಿಳಿಸು

ಹೃದಯ - ಎದೆ , ಗುಂಡಿಗೆ

 

ಬ್ಲಾಗಿನ ಪರಿಚಯ :

ಈ ಬ್ಲಾಗ್ ಶಬ್ದ ಮತ್ತು ಅರ್ಥಗಳ ಕುರಿತಾಗಿದೆ .

ಈ ಬ್ಲಾಗಿನಲ್ಲಿ ನಾನು ಕಂಡುಕೊಂಡ ಹೊಸ/ಹಳೆ ಶಬ್ದಗಳು / ಅರ್ಥಗಳು ಇತ್ಯಾದಿಗಳನ್ನು ಕೊಡುವ ಆಸೆ ಇದೆ .

This page is powered by Blogger. Isn't yours?